Slide
Slide
Slide
previous arrow
next arrow

ಶಿರಸಿ ವಕೀಲರ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ ನಾಯ್ಕ ಆಯ್ಕೆ

300x250 AD

ಶಿರಸಿ: ಜಿಲ್ಲೆಯ ಪ್ರತಿಷ್ಠಿತ ನ್ಯಾಯವಾದಿಗಳ ಸಂಘಗಳಲ್ಲಿ ಒಂದಾದ ಶಿರಸಿ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಜಯಪ್ರಕಾಶ ಎಂ. ನಾಯ್ಕ ಅವಿರೋಧವಾಗಿ ಆಯ್ಕೆಗೊಂಡರು.

ನಗರದ ನ್ಯಾಯಾಲಯದ ಸಭಾಭವನದಲ್ಲಿ ಹಿರಿಯ ವಕೀಲ ಜಗದೀಶ ಹೊನ್ನಾವರ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಸಾಧಾರಣ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

300x250 AD

ಉಪಾಧ್ಯಕ್ಷರಾಗಿ ಆರ್ ವಿ ಶೆಟ್ಟಿ, ಕಾರ್ಯದರ್ಶಿಯಾಗಿ ಆರ್.ಎಸ್. ಹೊಸೂರು, ಜಂಟಿ ಕಾರ್ಯದರ್ಶಿಯಾಗಿ, ಮಂಜುನಾಥ ಶೇರುಗಾರು, ಖಜಾಂಚಿಯಾಗಿ, ಹರೀಶ್ ನಾಯ್ಕ,ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ, ಪಿ.ವಿ.ನಾಯ್ಕ, ಎನ್.ಟಿ.ಶೆಟ್ಟಿ, ಎಂ.ಆಯ್.ಜುಕಾಕ್, ವಿ.ಎಸ್.ಹೆಗಡೆ, ಜ್ಯೋತಿ ಗೌಡ, ಉದಯ ನಾಯ್ಕ, ಹರೀಶ ನಾಯ್ಕ, ಶ್ರೀಪಾದ ನಾಯ್ಕ,ಎನ್,ಆರ್, ಶೆಟ್ಟಿ,ಮಧು ನಾಯ್ಕ, ಆಯ್ಕೆಯಾದರು,
ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಭಾಗವಹಿಸಿದ್ದರು.ನಿರೂಪಣೆಯನ್ನು ವಕೀಲರಾದ ಬಸವರಾಜ ದೊಡ್ಮನಿ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top